ಸಿಎಂರನ್ನ ಪಾಕಿಸ್ತಾನಕ್ಕೆ ಕಳುಹಿಸಿದ್ರೂ ತಪ್ಪಿಲ್ಲ: ಸಂಜಯ್ ಪಾಟೀಲ್

ಮಂಗಳವಾರ, 7 ನವೆಂಬರ್ 2017 (19:27 IST)
ಬೆಳಗಾವಿ: ಸಿಎಂ ಸಿದ್ದರಾಮಯ್ಯರನ್ನ ಪಾಕಿಸ್ತಾನಕ್ಕೆ ಕಳುಹಿಸಿದ್ರೆ ತಪ್ಪಿಲ್ಲ ಎಂದು ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟಿಪ್ಪು ಜಯಂತಿ ವಿರೋಧಿ ರ್ಯಾಲಿಯಲ್ಲಿ ಮಾತನಾಡಿದ ಸಂಜಯ್ ಪಾಟೀಲ್, ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ರೆ ತಪ್ಪಿಲ್ಲ ಎಂದು ಸಿಎಂ ಹೇಳುತ್ತಾರೆ. ಇಂತಹವರನ್ನು ಪಾಕಿಸ್ತಾನಕ್ಕೆ ಕಳುಹಿಸಿದರೂ ಯಾವುದೇ ತಪ್ಪಿಲ್ಲ. ಶೇ.80ರಷ್ಟು ಹಿಂದುಗಳ ಭಾವನೆ ಅರ್ಥ ಮಾಡಿಕೊಳ್ಳದ ನೀನು ಯಾರು ಎಂದು ಏಕವಚನದಲ್ಲಿಯೇ ಪ್ರಶ್ನಿಸಿದ್ದಾರೆ.

ನಿನ್ನ ಜಾತಿ, ಡಿಎನ್ಎ ಪರೀಕ್ಷೆ ಮಾಡುವ ಅವಶ್ಯಕತೆಯಿದೆ. ಹಿಂದುಗಳು ಎಚ್ಚರವಾದ್ರೆ ನಿಮ್ಮ ಏನೆಲ್ಲ ಕತ್ತರಿಸುತ್ತಾರೆ ನೋಡಿ. ಹಿಂದು ಧರ್ಮಕ್ಕಾಗಿ ಖಡ್ಗ ಹಿಡಿಯಲು ಸಿದ್ಧ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ