ನಾಯಿಯನ್ನು ಉಳಿಸಲು ಹೋಗಿ ಶಾಸಕನ ಪುತ್ರನ ದುರ್ಮರಣ

ಸೋಮವಾರ, 20 ಜೂನ್ 2016 (08:43 IST)
ಕಾರು ಪಲ್ಟಿಯಾಗಿ ಚಿತ್ರದುರ್ಗದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರ ಮಗ ಅಭಿಷೇಕ ದುರ್ಮರಣವನ್ನಪ್ಪಿದ ಘಟನೆ ಹೊಸಕೋಟೆ - ಕೋಲಾರ ಹೆದ್ದಾರಿ ಬಳಿಯ ಅಟ್ಟೂರಿನಲ್ಲಿ ನಡೆದಿದೆ. 

ಘಟನೆಯಲ್ಲಿ ಮತ್ತೆ ನಾಲ್ವರು ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರನ್ನು ಪೂಜಾ, ಅನು, ಸುಮುಖ್ ಮತ್ತು ದ್ರುಪದ್ ಎಂದು ಗುರುತಿಸಲಾಗಿದೆ.
 
ಬೆಂಗಳೂರು ನಗರದ ದಯಾನಂದ ಸಾಗರ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ಅಭಿಷೇಕ್ (24) ಮತ್ತು ಸ್ನೇಹಿತರು ಗೆಳತಿ ಪೂಜಾ ಹುಟ್ಟುಹಬ್ಬದ ಪಾರ್ಟಿ ಆಚರಿಸಿ ಪೋರ್ಡ್ ಫಿಗೋ ಕಾರ್‌ನಲ್ಲಿ ಮರಳುತ್ತಿದ್ದರು. ಆ ಸಂದರ್ಭದಲ್ಲಿ ಕಾರಿಗೆ ನಾಯಿ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್‌ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆ ದಾಖಲಿಸಲಾಯಿತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಚಿತ್ರದುರ್ಗಕ್ಕೆ ರವಾನಿಸಲಾಗಿದೆ.
 
ಹೊಸಕೋಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ