ಕರುಳ ಬಳ್ಳಿಯನ್ನೇ ಬೆಂಕಿಗೆ ಎಸೆದ ಪಾಪಿ ತಾಯಿ!

ಗುರುವಾರ, 19 ಜನವರಿ 2017 (12:10 IST)
ಕುಡಿದ ಮತ್ತಿನಲ್ಲಿ ಪಾಪಿ ತಾಯಿಯೋರ್ವಳು ತನ್ನ ಕರುಳ ಬಳ್ಳಿಯನ್ನೇ ಬೆಂಕಿಗೆ ಎಸೆದ ಅಮಾನವೀಯ ಕೃತ್ಯ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಗ ಚೆಕ್ಕೆರೆ ಹಾಡಿಯಲ್ಲಿ ನಡೆದಿದೆ.
ಕುಡಿದು ಮತ್ತಿನಲ್ಲಿದ್ದ ಮಹಾ ತಾಯಿ ಸಧಾ ಚಳಿಗೆ ಮೈ ಕಾಯಿಸಲೆಂದು ಹಾಕಿದ್ದ ಬೆಂಕಿಗೆ ತನ್ನ ಎರಡು ವರ್ಷದ ಗಂಡು ಮಗುವನ್ನು ಎಸೆದಿದ್ದಾಳೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಗುವಿನ ಸ್ಥಿತಿ ಗಂಭೀರವಾಗಿದ್ದರು ಸಹ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ತದನಂತರ ಅಂಗನವಾಡಿ ಕಾರ್ಯಕರ್ತರು ಪಾಪಿ ತಾಯಿಯ ಮನವೊಲಿಸಿ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
 
ಈ ಸಂಬಂಧ ಎಚ್‌.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ