ಉಪಚುನಾವಣೆಗೆ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲು ಕಸರತ್ತು ಮಾಡುತ್ತಿರುವ ಸಂಸದ ಶಿವಕುಮಾರ್ ಉದಾಸಿ

ಶನಿವಾರ, 2 ಅಕ್ಟೋಬರ್ 2021 (16:58 IST)
ಹಾನಗಲ್ ಉಪಚುನಾವಣೆಗೆ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲು ಸಂಸದ ಶಿವಕುಮಾರ್ ಉದಾಸಿ ಸಾಕಷ್ಟು ಕಸರತ್ತು ನಡೆಸ್ತಿದ್ದಾರೆ. ಹಾನಗಲ್‌ನಲ್ಲಿ ರೇವತಿ ಉದಾಸಿರಿಗೆ ಟಿಕೆಟ್ ಕೊಡಿಸಲು ಶಿವಕುಮಾರ್ ಉದಾಸಿ ಪಕ್ಷದ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಉದಾಸಿ ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಹಿಂದೆ ಹಿಂದೆನೇ ಸುತ್ತುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬೊಮ್ಮಾಯಿ, ಹಾನಗಲ್‌ ಸಂಬಂಧ ಈಗಾಗಲೇ ಸಭೆ ನಡೆಸಲಾಗಿದೆ. ನಾಳಿನ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ ಅಂದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ