ಸಂಸದೆ ಶೋಭಾಗೆ ಘೇರಾವ್

ಶುಕ್ರವಾರ, 19 ಅಕ್ಟೋಬರ್ 2018 (20:48 IST)
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಪ್ಪರ್ ಮಾಲೀಕರಿಂದ ಘೇರಾವ್ ಹಾಕಿದ ಘಟನೆ ನಡೆದಿದೆ.

ಕುಂದಾಪುರದ ಕೋಟೇಶ್ವರದಲ್ಲಿ ಘಟನೆ ನಡೆದಿದ್ದು, ಎರಡನೇ ದಿನಕ್ಕೆ ಕಾಲಿಟ್ಟ ಟಿಪ್ಪರ್ ಮುಷ್ಕರನಿರತರು ಘೇರಾವ್ ಹಾಕಿದ್ದಾರೆ.
ಮರಳು ಸಮಸ್ಯೆ ಪರಿಹರಿಸಲು ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದೆ. ಮುಷ್ಕರ ವೇಳೆ ಶೋಭಾ ಕರಂದ್ಲಾಜೆ ಆಗಮಿಸಿದರು. ಆಗ ನೆರಳಿಗೆ ಬಂದು ಮಾತಾಡುವಂತೆ ಶೋಭಾ ಹೇಳಿಕೆ ನೀಡಿದ್ದು, ಇದರಿಂದ ಆಕ್ರೋಷಗೊಂಡ ಟಿಪ್ಪರ್ ಮಾಲಿಕರು ಘೇರಾವ್ ಹಾಕಿದರು.

ಡಿಸಿಯವರನ್ನು ಕಂಟ್ರೋಲ್ ಮಾಡಲು ನಿಮಗಾಗಲ್ಲವೇ? ಎಲ್ಲರೂ ನಮ್ಮವರೇ ಅಂದುಕೊಂಡರೆ ನೀವೇನು ಮಾಡಿಲ್ಲ. ನಿಮ್ಮ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ಆದರೆ ನೀವು ನಮಗೆ ಉಪಕಾರ ಮಾಡಿಲ್ಲ. ಎರಡು ವರ್ಷಗಳಿಂದ ಮರಳು ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು, ಕಾರನ್ನು ಅಡ್ಡಗಟ್ಟಿ ಸಂಸದೆಗೆ ಘೇರಾವ್ ಹಾಕಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ