ಮುನಿರತ್ನ ನಕಲಿ ಮತದಾರ ಚೀಟಿ ಪ್ರಕರಣ; ಹೈಕೋರ್ಟ್ ನಿಂದ ಮಧ್ಯಂತರ ಆದೇಶ ಪ್ರಕಟ

ಶುಕ್ರವಾರ, 20 ಮಾರ್ಚ್ 2020 (10:10 IST)
ಬೆಂಗಳೂರು : ನಕಲಿ ಮತದಾರ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನರ್ಹ ಶಾಸಕ ಮುನಿರತ್ನ ಅವರನ್ನು ಅಸಿಂಧುಗೊಳಿಸಬೇಕೆಂದು ಒತ್ತಾಯಿಸಿ ಸಲ್ಲಿಸಲಾದ ಅರ್ಜಿಯ  ಮಧ್ಯಂತರ ಆದೇಶವನ್ನು  ಹೈಕೋರ್ಟ್ ಇಂದು ಪ್ರಕಟಿಸಲಿದೆ.


2018ರ ಚುನಾವಣೆಯ ವೇಳೆ ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಅವರ ಕ್ಷೇತ್ರದಲ್ಲಿ ನಕಲಿ ಮತದಾರ ಚೀಟಿಗಳು ಪತ್ತೆಯಾಗಿದ್ದವು. ಆದಕಾರಣ ಮುನಿರತ್ನ ಅಕ್ರಮ ಎಸಗಿದ್ದಾರೆ ಎಂದು  ಆರ್ ಆರ್ ನಗರದ ಪರಾಜಿತ ಅಭ್ಯರ್ಥಿ ಮುನಿರಾಜು ಗೌಡ ಮುನಿರತ್ನ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.


ಆದರೆ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು  ಕೋರ್ಟ್ ಈ ಅರ್ಜಿಯನ್ನು ತಳ್ಳಿ ಹಾಕಿತು. ಆದಕಾರಣ ಮುನಿರಾಜು ಮತ್ತೊಂದು ಸಲ್ಲಿಸಿದ್ದು, ಈ ಕುರಿತ ಆದೇಶವನ್ನು ಇಂದು ಹೈಕೋರ್ಟ್ ಪ್ರಕಟಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ