ನಾಡಿನಾದ್ಯಂತ ಸಂಭ್ರಮದ ನಾಗರಪಂಚಮಿ ಆಚರಣೆ

ಭಾನುವಾರ, 7 ಆಗಸ್ಟ್ 2016 (10:31 IST)
ಇಂದು ನಾಡಿನಾದ್ಯಂತ ಸಂಭ್ರಮದ ನಾಗರಪಂಚಮಿ ಆಚರಣೆ ಭಕ್ತಿ ಭಾವಗಳಿಂದ ಆಚರಿಸಲಾಗುತ್ತಿದೆ. ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇಂದು ಬೆಳಗ್ಗಿನಿಂದಲೇ ಭಕ್ತರು ನಾಗ ಬನಗಳಿಗೆ ತೆರಳಿ ನಾಗನ ದರ್ಶನ ಪಡೆಯುತ್ತಿದ್ದಾರೆ.


ಇಂದು ಬೆಳಿಗ್ಗೆಯಿಂದಲೇ ನಾಡಿನ ನಾಗದೇವಾಲಯಗಳಿಗೆ ಜನ ತಂಡೋಪತಂಡವಾಗಿ ತೆರಳಿ ಹುತ್ತಕ್ಕೆ ಹಾಲೆರೆದು ಪೂಜೆ ಪುನಸ್ಕಾರ ಸಲ್ಲಿಸಿದರು. ಶ್ರಾವಣ ಮಾಸದ ಮೊದಲ ಹಬ್ಬ ಎನ್ನಿಸಿಕೊಂಡಿರುವ ನಾಗರಪಂಚಮಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.

ನಾಗನಿಗೆ ಹಾಲು ಅರಶಿನ ಜೇನು ತುಪ್ಪ ಕೇದಗೆಯನ್ನು ಅರ್ಪಿಸುವುದರ ಮೂಲಕ ನಾಗದೇವರಿಗೆ ಭಕ್ತಿ ಭಾವಗಳಿಂದ ಪೂಜೆ ಸಲ್ಲಿಸುತ್ತಿದ್ದಾರೆ.
 
ವಿವಿಧ ನಾಗಾಲಯಗಳು, ಸುಬ್ರಹ್ಮಣ್ಯ ದೇವಸ್ಥಾಗಳಿಗೆ ಹಲವು ಭಕ್ತರು ಆಗಮಿಸಿ ನಾಗದೇವರು ಆಶೀರ್ವಾದ ಪಡೆಯುತ್ತಿದ್ದಾರೆ. ಇನ್ನೂ ಉತ್ತರ ಕರ್ನಾಟಕದಲ್ಲಿ ನಾಗರ ಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸುವುದು ಎಲ್ಲೆಡೆ ಕಂಡು ಬರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ