ಸಿಲಿಕಾನ್​ ಸಿಟಿಯಲ್ಲಿ ‘ನಮೋ’ ರೋಡ್​ ಶೋ

ಶನಿವಾರ, 6 ಮೇ 2023 (14:43 IST)
ಇಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ಅದ್ದೂರಿಯಾಗಿ ನಡೆದಿದ್ದು, ರಸ್ತೆಯೆಲ್ಲಾ ಕೇಸರಿಮಯವಾಗಿತ್ತು.. ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ ಬಜರಂಗ ದಳದ ಬ್ಯಾನ್​​ ವಿಚಾರವೇ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದ್ದು, ಇದು ರೋಡ್​ ಶೋನಲ್ಲೂ ಅನುರಣಿಸಿತು. ಕಾಡುಮಲ್ಲೇಶ್ವರ ದೇವಸ್ಥಾನದ ಬಳಿ ಸಾವಿರಾರು ಕಾರ್ಯಕರ್ತರು ಆಂಜನೇಯನ ಮುಖವಾಡ ಧರಿಸಿ ಜೈ ಭಜರಂಗಿ.. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ರು..ಈ ವೇಳೆ ರೋಡ್​ ಶೋನಲ್ಲಿ ಹನುಮಂತನ ಮುಖವಾಡಗಳನ್ನು ಧರಿಸಿದ ಹಲವಾರು ಜನರು ಭಾಗವಹಿಸಿದ್ದರು. ಹಿಂದುತ್ವ ಸಂಘಟನೆಯಾದ ಬಜರಂಗದಳವನ್ನು ನಿಷೇಧಿಸುವಂತೆ ಸೂಚಿಸಿದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ವಿರೋಧಿಸಲು ಬಿಜೆಪಿ ಕಾರ್ಯಕರ್ತರು ಭಗವಾನ್ ಹನುಮಂತನ ಮುಖವಾಡಗಳನ್ನು ಧರಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ