BSY ಭೇಟಿ ಮಾಡಿದ ನೆಹರು ಓಲೇಕಾರ್​​​

ಶುಕ್ರವಾರ, 14 ಏಪ್ರಿಲ್ 2023 (17:08 IST)
BJP ಟಿಕೆಟ್​ ಘೋಷಣೆ ಮಾಡಿದ ಬಳಿಕ ಭಿನ್ನಮತ, ಬಂಡಾಯ ಸ್ಫೋಟಗೊಂಡಿದೆ. ಹಾವೇರಿ BJP ಟಿಕೆಟ್ ಗವಿಸಿದ್ದಪ್ಪ ದ್ಯಾವಣ್ಣವರ್​​​​ಗೆ ನೀಡಲಾಗಿದ್ದು, ಟಿಕೆಟ್​ ಕೈ ತಪ್ಪಿದ್ದಕ್ಕೆ ನೆಹರು ಓಲೇಕಾರ್​​​ ಕೆಂಡಕಾರಿದ್ದಾರೆ.. ಈ ಹಿನ್ನೆಲೆಯಲ್ಲಿ ಇಂದು ನೆಹರು ಓಲೇಕಾರ್ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಕುಮಾರಕೃಪಾ ರಸ್ತೆಯ ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ನೆಹರು ಓಲೇಕಾರ್​​, ಟಿಕೆಟ್​ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ