ವಿದ್ಯಾವಾರಿಧಿ ಹಾಸ್ಟೆಲ್ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್

ಶುಕ್ರವಾರ, 10 ಮಾರ್ಚ್ 2017 (09:39 IST)
ಮಾಜಿ ಶಾಸಕ ಕಿರಣ್ ಕುಮಾರ್`ಗೆ ಸೇರಿದ ತುಮಕೂರು ಜಿಲ್ಲೆಯ ಹುಳಿಯಾರುವಿನ ವಿದ್ಯಾವಾರಿದಿ ಶಾಲೆಯಲ್ಲಿ ಆಹಾರ ಸೇವಿಸಿ ಮೂವರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಘಟನೆಯ ಸುತ್ತ ಅನುಮಾನಗಳ ಹುತ್ತ ಬೆಳೆದು ನಿಂತಿದೆ.


ನಿಜವಾಗಿಯೂ ಫುಡ್ ಪಾಯ್ಸನಿಂಗ್ ಆಗಿ ವಿದ್ಯಾರ್ಥಿಗಳು ಮೃತಪಟ್ಟರಾ ಅಥವಾ ಯಾರಾದರೂ  ಉದ್ದೇಶಪೂರ್ವಕವಾಗಿಯೇ ವಿಷ ಬೆರೆಸಿದರಾ? ಎಂಬ ಅನುಮಾನ ಮೂಡತೊಡಗಿದೆ.

ಅನೈತಿಕ ಸಂಬಂಧದ ಹೊಗೆ: ಸ್ಥಳೀಯ ಮಾಧ್ಯಮವೊಂದರ ವರದಿ ಪ್ರಕಾರ, ಕಾಲೇಜಿನ ಉಚ್ಚಾಟಿತ ಪ್ರಾಶುಪಾಲರು ಮತ್ತು ಹಾಸ್ಟೆಲ್ ಮಹಿಳಾ ಸಿಬ್ಬಂದಿಯೊಬ್ಬರ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆಯೇ ಗಲಾಟೆ ನಡೆದಿತ್ತಂತೆ. ಬಳಿಕ ಪ್ರಾಂಶುಪಾಲರನ್ನ ಶಾಲೆಯಿಂದ ಹೊರಹಾಕಲಾಗಿತ್ತಂತೆ. ಹೀಗಾಗಿ, ಉಚ್ಚಾಟಿತ ಪ್ರಾಂಶುಪಾಲರೇ ಈ ಕೃತ್ಯ ಸಗಿರುವ ಅನುಮಾನ ಮೂಡಿದ್ದು, ಪೊಲೀಸರು ಮಾಜಿ ಪ್ರಾಂಶುಪಾಲನ ಹುಡುಕಾಟದಲ್ಲೂ ತೊಡಗಿದ್ದಾರೆ ಎನ್ನಲಾಗಿದೆ

ವೆಬ್ದುನಿಯಾವನ್ನು ಓದಿ