ನವವಿವಾಹಿತೆ ಸಾವು: ಕೊಲೆಯೋ? ಆತ್ಮಹತ್ಯೆಯೋ?

ಶನಿವಾರ, 17 ಸೆಪ್ಟಂಬರ್ 2016 (08:38 IST)
ನವವಿವಾಹಿತೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿದ್ಯಾರಣ್ಯಪುರದ ತಿಂಡ್ಲು ಕ್ರಾಸ್ ಬಳಿಯಲ್ಲಿರುವ ಸುಮಧುರ ಅಪಾರ್ಟ್‌ಮೆಂಟ್‌ನಲ್ಲಿ ಬಿಇ ಪಧವೀಧರೆ ತೇಜಸ್ವಿನಿ (25) ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 
 
ತೇಜಸ್ವಿನಿಗೆ ದೇವರಾಜ್ ಎನ್ನುವವರ ಜತೆ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಇಬ್ಬರು ಕೂಡ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 
 
ಮೃತಳ ಪೋಷಕರ ಪ್ರಕಾರ ದೇವರಾಜ್, ಪತ್ನಿಗೆ ಹಣ ನೀಡು ಸ್ವಂತ ಉದ್ಯೋಗ ಮಾಡ್ತೀನಿ ಎಂದು ಕಿರುಕುಳ ನೀಡುತ್ತಿದ್ದರಂತೆ. ಅವರೇ ತಮ್ಮ ಮಗಳನ್ನು ಸಾಯಿಸಿ ನೇಣು ಹಾಕಿದ್ದಾರೆ ಎಂದು ಅವರ ಆರೋಪ.
 
ದೇವರಾಜ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯಸತ್ಯತೆ ಹೊರಬರಲಿದೆ.
 
ಕೊಡಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ