ಕಾಂಗ್ರೆಸ್ ನಿಜವಾದ ಬಣ್ಣ ಬಯಲು: ಕೆ.ಎಸ್. ಈಶ್ವರಪ್ಪ

ಶುಕ್ರವಾರ, 24 ಫೆಬ್ರವರಿ 2017 (09:37 IST)
ಕೆಪಿಸಿಸಿ ಖಜಾಂಜಿ, ಶಾಸಕ ಗೋವಿಂದರಾಜು ಡೈರಿಯಲ್ಲಿದ್ದ ವಿಚಾರ ಬಹಿರಂಗಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ವಿಪಕ್ಷನಾಯಕ ಕೆ.ಎಸ್. ಈಶ್ವರಪ್ಪ ರಾಜ್ಯದ ಜನರ ಮುಂದೆ ಕಾಂಗ್ರೆಸ್ ನಿಜವಾದ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಸಿಎಂ ಯಡಿಯೂರಪ್ಪನವರ ಬಗ್ಗೆ ಕೈ ನಾಯಕರು ಹಗುರವಾಗಿ ಮತ್ತು ಹಾಸ್ಯಾಸ್ಪದವಾಗಿ ಮಾತನಾಡಿದ್ದರು.  ಆರೋಪಿಸಿದಂತೆ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ನಮ್ಮ ರಾಜ್ಯಾಧ್ಯಕ್ಷರು ಈಗ ನೀಡಿದ್ದಾರೆ. ಹೀಗಾಗಿ ಕೈ ನಾಯಕರೆಲ್ಲರೂ ಬಹಿರಂಗವಾಗಿ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
 
ಡೈರಿ ಮತ್ತು  ಸಿಡಿ ಕುರಿತು ಉನ್ನತ ತನಿಖೆ ನಡೆಯಲಿ. ಈ ಮೂಲಕ ತಪ್ಪಿತಸ್ಥರು ಯಾರೆಂಬುದು ಬಹಿರಂಗವಾಗಲಿ ಎಂದು ಈಶ್ವರಪ್ಪ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ