ಮತ್ತೆ ಮೈಸೂರಿಗೆ ರೋಹಿಣಿ ಸಿಂದೂರಿ:ಆನ್ ಲೈನ್ ನಲ್ಲಿ ಅಭಿಯಾನ ಶುರು

ಶನಿವಾರ, 12 ಜೂನ್ 2021 (10:01 IST)
ಮೈಸೂರು: ವರ್ಗಾವಣೆಗೊಂಡ ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿ ಮತ್ತೆ ಜಿಲ್ಲಾಧಿಕಾರಿಯಾಗಿ ಮರಳಬೇಕೆಂದು ಆನ್ ಲೈನ್ ನಲ್ಲಿ ಅಭಿಯಾನ ಶುರುವಾಗಿದೆ.


ಚೇಂಜ್ ಆರ್ಗ್ ಎಂಬ ಸಂಸ್ಥೆ ರೋಹಿಣಿ ಸಿಂದೂರಿಯವರನ್ನು ಮರಳಿ ಜಿಲ್ಲಾಧಿಕಾರಿಯಾಗಿ ಮಾಡಬೇಕೆಂದು ಬ್ರಿಂಗ್ ಬ್ಯಾಕ್ ರೋಹಿಣಿ ಸಿಂದೂರಿ’ ಎಂಬ ಆನ್ ಲೈನ್ ಅಭಿಯಾನ ಶುರು ಮಾಡಿದೆ. ಇದಕ್ಕೆ ಸಾಕಷ್ಟು ಜನ ಕೈಜೋಡಿಸಿದ್ದಾರೆ.

ಚೇಂಜ್ ಆರ್ಗ್ ಸಂಸ್ಥೆ ಈ ಸಹಿ ಅಭಿಯಾನವನ್ನು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಗೆ ತಲುಪಿಸಿದೆ. ರೋಹಿಣಿ ಭೂ ಮಾಫಿಯಾ ಕುರಿತು ತನಿಖೆಗೆ ಮುಂದಾದ ಬೆನ್ನಲ್ಲೇ ಅವರ ವಿರುದ್ಧ ಸಂಚು ನಡೆಸಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ. ಹೀಗಾಗಿ ಅವರನ್ನು ಮರಳಿ ಮೈಸೂರಿಗೇ ಜಿಲ್ಲಾಧಿಕಾರಿಯಾಗಿ ನೇಮಿಸಲು ಸಾರ್ವಜನಿಕರಿಂದ ಭಾರೀ ಒತ್ತಾಯ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ