ಕಾಂಗ್ರೆಸ್‌ ಗ್ಯಾರಂಟಿ ಬೋಗಸ್‌ಗೆ ಜನ ತಕ್ಕ ಬುದ್ಧಿ ಕಲಿಸಿದ್ದಾರೆ: ಆರ್‌.ಅಶೋಕ್‌

sampriya

ಮಂಗಳವಾರ, 4 ಜೂನ್ 2024 (17:21 IST)
ಬೆಂಗಳೂರು:  ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ವಾರಂಟಿ ಇಲ್ಲದ್ದಷ್ಟು ಹಾಳಾಗಿದ್ದು, ಇಂದು ಗ್ಯಾರಂಟಿ ಬೋಗಾಸ್‌ ಎಂದು ತಿಳಿದು ತಕ್ಕ ಬುದ್ಧಿ ಕಲಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದರು.

ಲೋಕಸಭೆ ಚುನಾವಣೆ ಫಕಿತಾಂಶದ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದ ಅವರು, ಎಕ್ಸಿಟ್‌ ಪೋಲ್‌ನಲ್ಲಿ ಎನ್‌ಡಿಎ 350 ದಾಡುತ್ತೇ ಎಂದು ಹೇಳಿತ್ತು. ಅದೇ ನಿರೀಕ್ಷೆಯಲ್ಲಿ ನಾವು ಇದ್ಧೇವು. ಆದರೆ ನಮಗೆ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಹಿನ್ನಡೆಯಾಗಿದೆ. ಆದರೆ ಸರ್ಕಾರ ರಚನೆಗೆ ಏನು ಸಮಸ್ಯೆಯಾಗಲ್ಲ ನರೇಂಧ್ರ ಮೋದಿ ಮತ್ತೇ ಪ್ರಧಾನಿಯಾಗುತ್ತಾರೆಂದು ಖುಷಿ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಡಬಲ್‌ ಡಿಜಿಟ್‌ ದಾಡುವ ಭರವಸೆ ನೀಡಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಈನ್ನೂ ಡಿಸಿಎಂ  ಡಿಕೆ ಶಿವಕುಮಾರ್‌ ಅವರ ಸಹೋದರ ನಿಂತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸುವ ಮೂಲಕ ಜನರ ದಿಕ್ಸೂಚಿ ಬದಲಾಗಿರುವುದನ್ನು ನಾವು ಕಾಣಬಹುದು.

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ವಾರೆಂಟಿ ಇಲ್ಲದ್ದಷ್ಟು ಹಾಳಾಗಿದೆ.  ಗಂಡನ ದುಡ್ಡು ಕಿತ್ತು ಹೆಂಡತಿಗೆ ಕೊಡುವ ಕಾಂಗ್ರೆಸ್‌ನ ಮನಸ್ಥಿತಿಯನ್ನು ಜನರು ಅರ್ಥಮಾಡಿಕೊಂಡು ತಕ್ಕ ಬುದ್ಧಿ ಕಲಿಸಿದ್ದಾರೆ ಎಂಧರು. 













ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ