ಪೈಪ್​​ ಲೈನ್​​​ ಒಡೆದು ನೀರು ಪೋಲು

ಭಾನುವಾರ, 25 ಸೆಪ್ಟಂಬರ್ 2022 (20:19 IST)
ಬೆಂಗಳೂರು-ಮೈಸೂರು ಹೆದ್ದಾರಿಯ ಕೆಂಗಲ್ ಗ್ರಾಮದ ಬಳಿ ಪೈಪ್ ಲೈನ್ ವಾಲ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ‌ಗ್ರಾಮಗಳಿಗೆ ಈ ಪೈಪ್​ ಲೈನ್​​ ನೀರನ್ನು ಪೂರೈಸುತ್ತದೆ. ರಾಮನಗರ ‌ನಗರಕ್ಕೆ ಕಾವೇರಿ ನೀರು ಒದಗಿಸುವ ಪೈಪ್ ಲೈನ್ ಇದಾಗಿದೆ. ಬೆಳಗ್ಗೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ರಸ್ತೆ ಮೇಲೆ ನೀರು ಹರಿದು ಬರ್ತಿದೆ. ಜೀವಜಲ ನಷ್ಟವಾಗಿ ಪೋಲಾಗ್ತಿದ್ರೂ ಸಹ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಪೈಪ್​​​ ಲೈನ್​​​ ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿ ಎಂದು ಸಾರ್ವಜನಿಕರು ಆಗ್ರಹ ಮಾಡ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ