ಮೂರನೆಯ ಮಹಾಯುದ್ಧಕ್ಕೆ ಮೋದಿ ತಯಾರಿ ಮಾಡಿಕೊಳ್ಳಲಿ: ಪೂಜಾರಿ ಸಲಹೆ

ಗುರುವಾರ, 2 ಫೆಬ್ರವರಿ 2017 (12:58 IST)
ಮೂರನೆಯ ಮಹಾಯುದ್ಧವಾದರೇ ಭಾರತಕ್ಕೆ ಉಳಿಗಾಲ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.
 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದೇಶಗಳು ಮೂರನೇ ಮಹಾಯುದ್ಧಕ್ಕೆ ಸಜ್ಜಾಗುತ್ತಿವೆ. ಮಹಾಯುದ್ಧವಾದರೇ ಭಾರತಕ್ಕೆ ಉಳಿಗಾಲ ಇಲ್ಲ. ಅಮೆರಿಕಾ ಬೃಹತ್ ಬಂಕರ್‌ಗಳನ್ನು ಸ್ಥಾಪಿಸಿಕೊಂಡಿದೆ. ದೇಶದ ರಕ್ಷಣೆಗೆ ಪ್ರಧಾನಿ ಮೋದಿ ತಯಾರಿ ಮಾಡಿಕೊಳ್ಳಲಿ ಎಂದು ಮನವಿ ಮಾಡಿಕೊಂಡರು.
 
ದೇಶಾದ್ಯಂತ ಏಕಾಏಕಿ ನೋಟ್ ಬ್ಯಾನ್‌ ಮಾಡಿರುವುದರಿಂದ ಜನ ತತ್ತರಿಸಿದ್ದಾರೆ. ಅಭಿವೃದ್ಧಿ ಹೊಂದಿರುವ ದೇಶಗಳೊಡನೆ ಕೈ ಜೋಡಿಸಿ, ಭಾರತ ದೇಶವನ್ನು ಆರ್ಥಿಕವಾಗಿ ಸದೃಡಗೊಳಿಸುವಂತೆ ಒತ್ತಾಯಿಸಿದರು.
 
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಸಮತೋಲನವಾಗಿದೆ. ಎಲ್ಲ ವರ್ಗದವರನ್ನು ಸಮಾಧಾನ ಪಡಿಸಲು ನೋಡಿದ್ದಾರೆ. ಎಲ್ಲರನ್ನು ಸಂತೃಪ್ತಿ ಪಡಿಸಲು ಯಾವ ಸರಕಾರದಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ