Darshan Thoogudeepa: ದರ್ಶನ್ ಗೆ ಇಂದು ಮೈಸೂರ್ ಸುತ್ತು ಹೊಡೆಸಲಿರುವ ಪೊಲೀಸರು

Krishnaveni K

ಮಂಗಳವಾರ, 18 ಜೂನ್ 2024 (09:44 IST)
ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಇಂದು ಪೊಲೀಸರು ಮೈಸೂರು ರೌಂಡ್ಸ್ ಮಾಡಿಸಲಿದ್ದಾರೆ. ಸ್ಥಳ ಮಹಜರು ಪ್ರಕ್ರಿಯೆಗಾಗಿ ಮೈಸೂರಿಗೆ ಕರೆದೊಯ್ಯಲಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್ ಮೈಸೂರಿಗೆ ತೆರಳಿದ್ದರು. ಅಲ್ಲಿ ರಾಡಿಸನ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಅಲ್ಲದೆ, ಇದಕ್ಕೆ ಮೊದಲು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಹೋಗಿದ್ದರು. ಇಲ್ಲಿ ಆರೋಪಿಗಳನ್ನು ಭೇಟಿಯಾಗಿ ಆರೋಪ ಒಪ್ಪಿಕೊಳ್ಳುವಂತೆ ಡೀಲ್ ಮಾಡಿಕೊಂಡಿದ್ದರು.

ಹೀಗಾಗಿ ಈ ಎಲ್ಲಾ ಸ್ಥಳಗಳ ಮಹಜರು ಮಾಡಬೇಕಿದೆ. ಇದಕ್ಕಾಗಿ ಇಂದು ದರ್ಶನ್ ರನ್ನು ಪೊಲೀಸರು ಇಲ್ಲಿಗೆ ಕರೆದುಕೊಂಡು ಹೋಗಲಿದ್ದಾರೆ . ಅವರ ಜೊತೆಗೆ ಮೈಸೂರಿನ ಫಾರ್ಮ್ ಹೌಸ್ ಗೆ ತೆರಳಿದ ಆರೋಪಿಗಳಾದ ಪ್ರದೋಷ್ ಸೇರಿದಂತೆ ಕೆಲವರನ್ನು ಕರೆದೊಯ್ಯುವ ಸಾಧ್ಯತೆಯಿದೆ.

ನಿನ್ನೆ ಹತ್ಯೆಗೆ ಮುನ್ನ ದರ್ಶನ್ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಗೆ ತೆರಳಿದ ಪೊಲೀಸರು ಸ್ಥಳ ಮಹಜರು ಮಾಡಿದ್ದರು. ಈ ವೇಳೆ ದರ್ಶನ್ ಮತ್ತು ಅವರ ಜೊತೆಗೆ ಅಂದು ಪಾರ್ಟಿಯಲ್ಲಿದ್ದ ನಟ ಚಿಕ್ಕಣ್ಣರನ್ನೂ ಕರೆದೊಯ್ದಿದ್ದರು. ಇಂದು ಮೈಸೂರಿನಲ್ಲಿ ಸ್ಥಳ ಮಹಜರು ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ