ಕುರುಬ ಬೃಹತ್ ಸಮಾವೇಶದಲ್ಲಿ ಭಾಗಿಯಾದ ರಾಜಕೀಯ ನಾಯಕರು; ಸಿದ್ದರಾಮಯ್ಯ ಗೈರು

ಭಾನುವಾರ, 7 ಫೆಬ್ರವರಿ 2021 (13:43 IST)
ಬೆಂಗಳೂರು : ಎಸ್ ಟಿ ಮೀಸಲಾತಿಗೆ ಆಗ್ರಹಿಸಿ ಬಿಐಇಸಿ ಮೈದಾನದಲ್ಲಿ ಇಂದು ಕುರುಬ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ.

ಕಾಗಿನೆಲೆ ನಿರಂಜನಾನಂದಪುರಿಶ್ರೀ ನೇತೃತ್ವದಲ್ಲಿ ಸಮಾವೇಶ ನಡೆಸಲಾಗಿದ್ದು, ಸಮಾವೇಶದಲ್ಲಿ ಸಮುದಾಯದ ವಿವಿಧ ಮಠಾಧೀಶರು, ಸಚಿವರಾದ ಕೆ.ಎಸ್.ಈಶ್ವರಪ್ಪ, ಎಂಟಿಬಿ ನಾಗರಾಜ್ ,ಭೈರತಿ ಬಸವರಾಜ್,  ಆರ್.ಶಂಕರ್, ಮಾಜಿ ಸಚಿವರಾದ ಹೆಚ್.ರೇವಣ್ಣ, ಬಂಡೆಪ್ಪ ಕಾಶಂಪುರ, ಕುರುಬ ಮುಖಂಡರು ಸೇರಿದಂತೆ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ.

ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಭಾಗಿಯಾಗಿಲ್ಲ ಎನ್ನಲಾಗಿದೆ. ಹಾಗೇ ಹೆಚ್.ಎಂ ರೇವಣ್ಣ ಅವರನ್ನು ಬಿಟ್ಟು ಉಳಿದ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ