ರಾಜಕೀಯವಾಗಿ ನಾವು ಏನ್ ಮಾತು ಕೊಟ್ಟಿದ್ದೇವೋ ಅದನ್ನ ಮಾಡುತ್ತೇವೆ- ಡಿಕೆಶಿ

ಮಂಗಳವಾರ, 6 ಜೂನ್ 2023 (17:55 IST)
ಕಾಂಗ್ರೆಸ್ ನ ಗೃಹಲಕ್ಷ್ಮೀ  ಗ್ಯಾರಂಟಿ ಬಗ್ಗೆ ಗೊಂದಲ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಒಂದು ಮನೆಗೆ ಒಂದೇ ಆರ್.ಆರ್ ನಂಬರ್ ಮಾತ್ರ ಪರಿಗಣನೆಗೆ ಕಂಡೀಷನ್ ಇದೆ ಎಂದು ಹೇಳಿದ್ರು.ಇನ್ನೂ ಗೃಹಜ್ಯೋತಿ ಕಂಡೀಷನ್ ಬಗ್ಗೆ ಯಾರು, ಯಾವ ಆಕ್ರೋಶ ಇಲ್ಲ, ನಿಮಗೆ ಆಕ್ರೋಶ ಅಷ್ಟೇ ನಾವು ಅದಕ್ಕೆ ಕ್ಲಾರಿಟಿ ಕೊಡ್ತೇವೆ.ಎಲ್ಲರೂ ಸ್ವಲ್ಪ ತಾಳ್ಮೆ‌ ಇಂದ ಇರಬೇಕು.ನಾವು ಗ್ಯಾರಂಟಿ ಕೊಟ್ಟಿದ್ದೇವೆ.ರಾಜಕೀಯವಾಗಿ ನಾವು ಏನ್ ಮಾತು ಕೊಟ್ಟಿದ್ದೇವೋ ಅದನ್ನ ಮಾಡುತ್ತೇವೆ.ಅಧಿಕಾರಿಗಳಿಗೆ ಅವರ ಆ್ಯಂಗಲ್  ಇರತ್ತೆ.ಯಾರಿಗೂ ಯಾವ ಆಕ್ರೋಶ, ಆತಂಕ ಬೇಡ.ಗಾಳಿ ಸುದ್ದಿ ಬಗ್ಗೆ ಯಾರಾದ್ರೂ ತಲೆ ಕೆಡಿಸಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ.ಎಲ್ಲವನ್ನೂ ಕೂತು ನಾವು ಚರ್ಚೆ ಮಾಡುತ್ತೇವೆ.ನಾವು ಏನು ಮಾತು ಕೊಟ್ಟಿದ್ದೇವೋ ಅದರಂತೆ ಮಾಡುತ್ತೇವೆ ಎಂದು ಡಿಸಿಎಂ‌ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ