ಸರ್ಕಾರದ ಮೇಲೆ ಗರಂ ಆದ ಹಿಂದೂಪರ ಸಂಘಟನೆಗಳು

ಗುರುವಾರ, 1 ಡಿಸೆಂಬರ್ 2022 (18:11 IST)
ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು ವಿಚಾರವಾಗಿ ಸರ್ಕಾರದ ಮೇಲೆ ಹಿಂದೂಪರ ಸಂಘಟನೆಗಳು ಗರಂ ಆಗಿದೆ.ಕೇಸರಿ ಕಾಲೇಜ್ ಆರಂಭಕ್ಕೆ ಹಿಂದೂಪರ ಸಂಘಟನೆಗಳು ಒತ್ತಡ ಹೇರಿದ್ದು,ಕೇಸರಿ ಕಾಲೇಜ್ ಬೇಕು ಹಿಂದುಗಳ ಕಾಲೇಜ್ ಬೇಕು, ಹಿಂದುತ್ವದ ಕಾಲೇಜ್ ಬೇಕು  ಹಿಂದೂ ರಾಷ್ಟ್ರ ಕಟ್ಟುವ ಕಾಲೇಜ್ ಬೇಕು,ಹಿಂದೂ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಕಾಲೇಜ್ ಬೇಕು,ಅಲ್ಲಿ ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಹಿನ್ನೆಲೆ ಇರುವ ಪಾಠಗಳೇ ಬೇಕು,ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಬೇಕು ಆ ಕಾಲೇಜಿಗೆ ಕೇಸರಿ ಬಣ್ಣ ಬಳದಿರಬೇಕು.ಎಲ್ಲಾ ವಿದ್ಯಾರ್ಥಿಗಳು ಕೇಸರಿ ಬಣ್ಣದ ವೇಷಭೂಷಣ ಇರಬೇಕು ಶಾಲೆಯಲ್ಲಿ ಎಲ್ಲಾ ಫೋಟೋಗಳು ಹಿಂದೂ ಧರ್ಮದ ಫೋಟೋಗಳೇ ಇರಬೇಕು.ಇನ್ನು ಮುಂತಾದವು ಬೇಕೇ ಬೇಕು ಇದೆಲ್ಲಾ ನಮಗೆ ನೀಡುವುದಾದರೆ ಅವರಿಗೂ ಕಾಲೇಜ್ ಮಾಡಿ ಎಂದು ಸರ್ಕಾರದ ಮೇಲೆ ಹಿಂದೂಪರ ಹೋರಾಟಗಾರರು ಒತ್ತಡ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ