ಚಾಮುಂಡೇಶ್ವರಿಯಲ್ಲಿ ರಂಗೇರಿದ ತಾರೆಯರ ಪ್ರಚಾರ

ಬುಧವಾರ, 2 ಮೇ 2018 (14:18 IST)
ಇಂದಿರಾಗಾಂಧಿ ಬಡಾವಣೆಯಲ್ಲಿ ನಟಿ ಜಯಮಾಲ, ಮುಖ್ಯಮಂತ್ರಿ ಚಂದ್ರು ಮತಯಾಚನೆ ಮಾಡಿದರು. 
ಇದೇ ವೇಳೆ ಸ್ಟಾರ್ ಕ್ಯಾಂಪೇನ್ ನಟಿ ಜಯಮಾಲಾಗೆ ಜೋಸೇಫ್ ಎಂಬುವವರು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡರು. ಫಾಲ್ಕನ್ ಕಾರ್ಖಾನೆ ಮುಚ್ಚಿ ವರ್ಷಗಳೇ ಆಯಿತು.ಅದನ್ನು ಓಪನ್ ಮಾಡಿಸಲು ಸಿದ್ದರಾಮಯ್ಯನವರಿಗೆ ಆಗಿಲ್ಲ. ನಾವು ಸಿದ್ದರಾಮಯ್ಯಗೆ  ಮತ ನೀಡುವುದಿಲ್ಲ ಜಿ.ಟಿ.ದೇವೇಗೌಡ ರಿಗೆ ಓಟ್ ಹಾಕ್ತಿನಿ.ಕುಮಾರಸ್ವಾಮಿ ಸಿಎಂ ಆದರೆ ಫಾಲ್ಕನ್ ಕಾರ್ಖಾನೆ ಯನ್ನು ಓಪನ್ ಮಾಡಿಸುತ್ತಾರೆ ಎಂದರು. 
 
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಜೋಸೇಫ್ ನಡುವೆ ಮಾತಿನ ಚಕಮಕಿ ನಡೆಯಿತು. ಮದ್ಯಪ್ರವೇಶಿಸಿದ ಪೊಲೀಸರು ಗಲಾಟೆಯನ್ನು ಶಮನಗೊಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ