ಆಸ್ತಿ ವಿವಾದ : ಫೈರಿಂಗ್ ಗೆ ವ್ಯಕ್ತಿ ಬಲಿ

ಭಾನುವಾರ, 5 ಜುಲೈ 2020 (18:15 IST)
ಸಂಬಂಧಿಕರ ನಡುವೆ ಶುರುವಾಗಿದ್ದ ಆಸ್ತಿವಿವಾದದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಧಾರವಾಡದ ಮದಿಹಾಳದ ಗಣೇಶನಗರದಲ್ಲಿ ಘಟನೆ ನಡೆದಿದ್ದು, ಗಲಾಟೆಯಲ್ಲಿ ಶಿವಯೋಗಿ ಭಾವಿಕಟ್ಟಿ ಗುಂಡೇಟಿಗೆ ಬಲಿಯಾಗಿದ್ದಾನೆ. ಈರಪ್ಪ ಯಂಗಳ್ಳಿ ಹಾಗೂ ಸುನೀಲ್ ಕೋಣನ್ನವರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಈರಪ್ಪ ಹಾಗೂ ಶ್ರೀಶೈಲ್ ನಡುವೆ ಆಸ್ತಿಗಾಗಿ ಜಗಳ ಶುರುವಾಗಿದೆ. ಆಗ ಗಲಾಟೆಯಲ್ಲಿ ಶ್ರೀಶೈಲ್ ಎಂಬಾತ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಶೂಟ್ ಮಾಡಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ