ಸಚಿವ ಡಿ.ಸುಧಾಕರ್ ವಿರುದ್ಧ ಜನತಾದಳದಿಂದ ಪ್ರತಿಭಟನೆ

ಬುಧವಾರ, 13 ಸೆಪ್ಟಂಬರ್ 2023 (14:29 IST)
d sudhakar
ದಲಿತರ ಭೂಮಿ ಕಬಳಿಕೆ, ಜಾತಿ ನಿಂದನೆ ಆರೋಪ ವಿಚಾರವಾಗಿ ಸಚಿವ ಡಿ.ಸುಧಾಕರ್ ವಿರುದ್ಧ ಜನತಾದಳದಿಂದ ಪ್ರತಿಭಟನೆಯನ್ನ ನಗರದ ಫ್ರೀಡಂ ಪಾರ್ಕ್ ನಲ್ಲಿ  ನಡೆಸಲಾಗಿದೆ.ಯಲಹಂಕ ವ್ಯಾಪ್ತಿಯಲ್ಲಿ ದಲಿತರ ಭೂಮಿ ಕಬಳಿಕೆ ಆರೋಪ ವಿಚಾರವಾಗಿ ಸುಬ್ಬಮ್ಮ ಎನ್ನುವವರ ಭೂಮಿ ಕಸಿದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.ಅಲ್ಲದೇ ಜಾತಿ ನಿಂದನೆ ಮಾಡಿದ್ದಾಗಿ ದೂರು ದಾಖಲಿಸಿದ್ದಾರೆ.ಸಚಿವರ ಮೇಲೆ FIR ಆಗಿದ್ರು ಸರ್ಕಾರ ಕ್ರಮ ಕೈಗೊಳ್ಳಿಲ್ಲ.ಹೀಗಾಗಿ ಸರ್ಕಾರ ಹಾಗೂ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತಾ ಒತ್ತಾಯ ಮಾಡಿ ಧರಣಿ ನಡೆಸಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ