ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ, ತಿಥಿ ಊಟ ಮಾಡಿಸಿದ ಪ್ರತಿಭಟನಾಕಾರರು

ಬುಧವಾರ, 9 ಜನವರಿ 2019 (12:06 IST)
ಬಳ್ಳಾರಿ : ಭಾರತ ಬಂದ್ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಅಣಕು ಶವಯಾತ್ರೆ ನಡೆಸಿದ್ದಾರೆ.


ಭಾರತ್ ಬಂದ್ ಎರಡನೇಯ ದಿನವಾದ ಇಂದು ಕೂಡ ಬಳ್ಳಾರಿಯಲ್ಲಿ ಮುಂದುವರಿದಿದೆ. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ ಬಳ್ಳಾರಿ ನಗರದ ರಾಯಲ್ ಸರ್ಕಲ್ ನಲ್ಲಿ ಪ್ರಧಾನಿ ಮೋದಿ ಅವರ ಅಣಕು ಶವಯಾತ್ರೆ ನಡೆಸಿದ್ದಾರೆ.
ಅಷ್ಟೇ ಅಲ್ಲದೇ ಅಣಕು ಶವದಹನ ಕ್ರಿಯೆ ಬಳಿಕ ಸ್ಥಳದಲ್ಲಿ ತಿಥಿ ಊಟ ಕೂಡ ಮಾಡಲಿದ್ದಾರೆ. ಅದಕ್ಕಾಗಿ ಹೋರಾಟಗಾರರು ಅಡುಗೆ ಮಾಡಲು ಪಾತ್ರೆ , ಆಹಾರ ಧಾನ್ಯಗಳನ್ನು ತಂದು ಅಡುಗೆ ಮಾಡಿ ತಿಥಿ ಊಟ ಹಾಕಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ