ಆರ್.ಅಶೋಕ್ ಹೇಳಿಕೆಗೆ ತಳ-ಬುಡ ಇರುವುದಿಲ್ಲ- ಸಿದ್ದರಾಮಯ್ಯ ತಿರುಗೇಟು

ಶನಿವಾರ, 11 ಮೇ 2019 (11:22 IST)
ಕಲಬುರಗಿ: 20ಕ್ಕೂ ಹೆಚ್ಚು ಶಾಸಕರಿಗೆ ಸರ್ಕಾರದ ಬಗ್ಗೆ ಅಸಮಾಧಾನವಿದೆ ಎಂದು ಶಾಸಕ ಆರ್.ಅಶೋಕ್ ಹೇಳಿಕೆಗೆ ಇದೀಗ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.



‘ಅವನಿಗೆ ಸತ್ಯವೂ ಗೊತ್ತಿಲ್ಲ, ಸುಳ್ಳೋ ಗೊತ್ತಿಲ್ಲ. ಅವನು ಏನು ಮಾತನಾಡುತ್ತಾನೆಂದು ಅವನಿಗೇ ಅರ್ಥ ಆಗಲ್ಲ. ಆರ್.ಅಶೋಕ್ ಹೇಳಿಕೆಗೆ ತಳ-ಬುಡ ಇರುವುದಿಲ್ಲ’ ಎಂದು ಕಲಬುರಗಿಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

 

ಅಲ್ಲದೇ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ‘ಕೈ’ ಸೇರಿದ್ರು ಎಂದಿದ್ದ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ನಾನು ಪಕ್ಷ ಬಿಟ್ಟಿದ್ದಕ್ಕೂ, ಜಾಧವ್ ಬಿಟ್ಟಿದ್ದಕ್ಕೂ ವ್ಯತ್ಯಾಸವಿದೆ. ಅಹಿಂದ್ ಚಟುವಟಿಕೆ ಹಿನ್ನಲೆ  ಜೆಡಿಎಸ್ ಪಕ್ಷದಿಂದ ದೇವೇಗೌಡರು ನನ್ನನ್ನು ಉಚ್ಚಾಟನೆ ಮಾಡಿದ್ದರು’ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ