ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಮಹಾರಾಷ್ಟ್ರ, ವಿಜಯವಾಡಕ್ಕೆ ತನಿಖಾ ತಂಡ

ಶುಕ್ರವಾರ, 1 ನವೆಂಬರ್ 2019 (17:08 IST)
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಂಡಿದೆ.


ಹೆಚ್ಚಿನ ಮಾಹಿತಿ ಕಲೆ ಹಾಕಲು ರೈಲ್ವೆ ಪೋಲಿಸರ ಎರಡು ವಿಶೇಷ ತಂಡಗಳು ಮತ್ತೆ ವಿಜಯವಾಡ ಹಾಗೂ ಕೊಲ್ಲಾಪುರಕ್ಕೆ ಪ್ರತ್ಯೇಕವಾಗಿ ತೆರಳಿವೆ.

ಸ್ಫೋಟ ಪ್ರಕರಣದ ಜಾಡು ಹಿಡಿದು ವಿಜಯವಾಡ ಹಾಗೂ ಕೊಲ್ಲಾಪುರಕ್ಕೆ ತೆರಳಿದ್ದ ವಿಶೇಷ ತಂಡಗಳು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಒಂದಿಷ್ಟು ಮಾಹಿತಿ ಕಲೆ ಹಾಕಿಕೊಂಡು ನಗರಕ್ಕೆ ಆಗಮಿಸಿದ್ದವು.

ಆದರೆ ಈ ತಂಡಗಳು ಹಾಕಿಕೊಂಡು ಬಂದ ಮಾಹಿತಿ ಅಪೂರ್ಣವಾಗಿದ್ದು, ಸ್ಫೋಟದ ವಸ್ತುವಿನ‌ ಕುರಿತು ಇನ್ನಷ್ಟು ಸಮರ್ಪಕ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ವಿಶೇಷ ತಂಡಗಳನ್ನು ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳು ಮತ್ತೆ ವಿಜಯವಾಡ ಹಾಗೂ ಕೊಲ್ಲಾಪುರಕ್ಕೆ ಕಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ