ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಆರ್ಭಟ

ಶನಿವಾರ, 10 ಸೆಪ್ಟಂಬರ್ 2022 (15:35 IST)
ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಮಹಾಮಳೆಗೆ ಜಿಲ್ಲೆಯ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿಂಚೋಳಿ ತಾಲೂಕಿನ ನಾಲ್ಕೈದು ಗ್ರಾಮಗಳು ಆತಂಕಲ್ಲಿದ್ದು ಗಡಿಕೇಶ್ವರ-ಹೊಡೆಬೀರನಹಳ್ಳಿ ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದ್ದು. ಗ್ರಾಮದ ಹಲವು ಮನೆಗಳಿಗೆ ನೀರು, ನುಗ್ಗಿ ಅಪಾರ ಪ್ರಮಾಣದ ದವಸಧಾನ್ಯಗಳು ನೀರುಪಾಲಾಗಿವೆ. ಹಳ್ಳದ‌ ನೀರಿನಲ್ಲಿ ‌ಜಾನುವಾರುಗಳು ಸಿಲುಕಿ ಪರದಾಡಿದವು, ಇನ್ನು ಮಳೆ ಇಂದಾಗಿ ಸಾವಿರಾರು ಎಕರೆ ಪ್ರದೇಶದ ಜಲಾವೃತವಾಗಿ ಬೆಳೆಗಳು ಸಂಪೂರ್ಣ ಸಂಪೂರ್ಣಹಾಳಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ