ಆರೆಸ್ಸೆಸ್ ವಿರುದ್ಧ ರಮಾನಾಥ್ ರೈ ಛೂ ಬಿಡಲು ಸಿಎಂ ನಿರ್ಧಾರ

ಬುಧವಾರ, 26 ಜುಲೈ 2017 (13:30 IST)
ಕರಾವಳಿ ಜಿಲ್ಲೆಗಳಲ್ಲಿ ಸಚಿವ ರಮಾನಾಥ್ ರೈಗೆ ಕಾಂಗ್ರೆಸ್ ನಾಯಕತ್ವ ನೀಡಲು ನಿರ್ಧರಿಸಲಾಗಿದ್ದು, ಅವರಿಗೆ ಪ್ರಮೋಷನ್ ನೀಡಿ ಗೃಹ ಸಚಿವರನ್ನಾಗಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಚಿವ ರಮಾನಥ್ ರೈ ವಿರುದ್ಧ ಕೆಲ ಮತೀಯ ಸಂಘಟನೆಗಳು ಒಂದಾಗಿ ರೈ ಅವರನ್ನು ಸೋಲಿಸಿದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದಂತೆ ಎಂದು ರಣತಂತ್ರ ರೂಪಿಸುತ್ತಿರುವ ಹಿನ್ನೆಲೆಯಲ್ಲಿ, ರೈ ಅವರಿಗೆ ಮತ್ತಷ್ಟು ಬಲವನ್ನು ತಂದುಕೊಡಲು ಕಾಂಗ್ರೆಸ್ ನಿರ್ಧರಿಸಿದೆ
 
ಬಂಟ್ವಾಳ ಘರ್ಷಣೆಯ ಬಳಿಕ ಸಚಿವ ರಮಾನಾಥ್ ಅವರನ್ನು ಆರೆಸ್ಸೆಸ್ ಸೇರಿದಂತೆ ಕೆಲ ಹಿಂದೂ ಸಂಘಟನೆಗಳು ಟಾರ್ಗೆಟ್‌ ಮಾಡುತ್ತಿವೆ. ಕೋಮುಘರ್ಷಣೆಗಳನ್ನು ಬಲವಾಗಿ ಹತ್ತಿಕುವಂತಾಗಲು ಕಠಿಣ ಕ್ರಮ ತೆಗೆದುಕೊಳ್ಳಲು ಸಚಿವರಿಗೆ ಫ್ರೀ ಹ್ಯಾಂಡ್‌ ನೀಡಲಾಗಿದೆ 
  
ಕರಾವಳಿ ಪಕ್ಷದೇಶದಲ್ಲಿ ಪಕ್ಷಧ ಬಲವರ್ಧನೆಗಾಗಿ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಪಕ್ಷದ ಹೈಕಮಾಂಡ್ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ