ಎಸ್ ಐಟಿ ತನಿಖೆಗೆ ಇಂದು ಗೈರು ಹಾಜರಾದ ರಮೇಶ್ ಜಾರಕಿಹೊಳಿ

ಶುಕ್ರವಾರ, 2 ಏಪ್ರಿಲ್ 2021 (12:19 IST)
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಸಮಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗ ಬೇಕಿದ್ದ ರಮೇಶ್ ಜಾರಕಿಹೊಳಿ ಅವರು ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ.

ಇಂದು ರಮೇಶ್ ಜಾರಕಿಹೊಳಿ ಅವರಿಗೆ ಅನಾರೋಗ್ಯದ ಹಿನ್ನಲೆಯಲ್ಲಿ  ಇಂದು ಎಸ್ ಐಟಿ ವಿಚಾರಣೆಗೆ ಹಾಜರಾಗಬೇಕಿದ್ದ ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಶ್ಯಾಮ್ ಸುಂದರ್ ಬಳಿ ಲೇಟರ್ ಕಳುಹಿಸಿದ ರಮೇಶ್ ಜಾರಕಿಹೊಳಿ ಅನಾರೋಗ್ಯದಿಂದ ವಿಚಾರಣೆಗೆ ಬರಲು ಆಗಲ್ಲ ಎಂದು ತಿಳಿಸಿದ್ದಾರೆ. ಹಾಗೇ ವಿಚಾರಣೆಗೆ ಬರಲು ವಿನಾಯ್ತಿ ಕೋರಿದ್ದಾರೆ.

ಶ್ಯಾಮ್ ಸುಂದರ್ ಜೊತೆ ಜಾರಕಿಹೊಳಿ ಆಪ್ತ ನಾಗರಾಜ್ ಅವರು ಟೆಕ್ನಿಕಲ್ ಸೆಂಟರ್ ಗೆ ಆಗಮಿಸಿ ಎಸ್ ಐಟಿ ಅ‍ಧಿಕಾರಿಗಳಿಗೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ