ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ : ಸಿಎಂ ಬದಲಾವಣೆಗೆ ಹೈಕಮಾಂಡ್ ಗೆ ಮೊರೆ

ಸೋಮವಾರ, 14 ಸೆಪ್ಟಂಬರ್ 2020 (10:40 IST)
ರಾಜ್ಯ ಬಿಜೆಪಿಯಲ್ಲಿ ಆಗಾಗ್ಗೆ ಮುಂಚೂಣಿಗೆ ಬಂದು ಮರೆಯಾಗುತ್ತಿರುವ ಸಿಎಂ ಬದಲಾವಣೆ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗೆ ಇಳಿಸಲೇಬೇಕು ಎಂದು ಬಿಜೆಪಿಯ ಹಿರಿಯರು ಪ್ಲಾನ್ ಮಾಡುತ್ತಿರುವುದು ಬಹಿರಂಗಗೊಂಡಿದೆ ಎನ್ನಲಾಗಿದೆ.

ಈ ಹಿಂದೆ ಕೆಲವು ಶಾಸಕರು ಅಲ್ಲಲ್ಲಿ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಈಗ ಲಿಂಗಾಯತ ಶಾಸಕರು ಹಾಗೂ ಇತರ ಶಾಸಕರು ಬಣಗಳಾಗಿ ಪಕ್ಷದ ವರಿಷ್ಠರಿಗೆ ಸಿಎಂ ಬದಲಾವಣೆ ಮಾಡುವಂತೆ ಆಗ್ರಹ ಮಾಡಿದ್ದಾರೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ