ಗಲಭೆ ಕೇಸ್ : ಟಿಪ್ಪು ಟೈಗರ್ ಸಂಘಟನೆ ಅಧ್ಯಕ್ಷ ಹೇಳಿದ್ದೇನು?

ಮಂಗಳವಾರ, 18 ಆಗಸ್ಟ್ 2020 (18:55 IST)
ರಾಜಧಾನಿಯಲ್ಲಿ ನಡೆದ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಸಂಘಟನೆ ಅಧ್ಯಕ್ಷನ ವಿಚಾರಣೆ ತೀವ್ರಗೊಂಡಿದೆ.

ಡಿಜೆ ಹಳ್ಳಿ ಹಾಗೂ ಕೆಜೆಹಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

ಈ ನಡುವೆ ಸಂಘಟನೆಯ ಅಧ್ಯಕ್ಷ ಆರೋಪಿ ವಾಜೀದ್ ಪಾಷಾ ತನ್ನ ತಪ್ಪನ್ನುಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಗಲಭೆಗೆ ಪ್ರಚೋದನೆ ನೀಡಿದ್ದು, ಜನರನ್ನು ಸೇರಿಸಿದ್ದು, ಗಲಾಟೆಗೆ ಕಾರಣವಾಗಿರುವ ಕುರಿತು ಪೊಲೀಸರು ಬಾಯಿ ಬಿಡಿಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ