ನಿರ್ಮಾಪಕ ಸಾರಾ ಗೋವಿಂದ್ ಕಾಂಗ್ರೆಸ್ ಸೇರ್ಪಡೆ

ಸೋಮವಾರ, 19 ಜುಲೈ 2021 (18:02 IST)
‌ರಾಜಾಜಿನಗರದ ಸುಭಾಷ್ ಚಂದ್ರ ಮೈದಾನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ ಸಾರಾ ಗೋವಿಂದ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಡವರಿಗೆ ಕಾರ್ಮಿಕ ವರ್ಗದವರಿಗೆ ಸಾರಾ ಗೋವಿಂದ್ ಎರಡು‌ ಸಾವಿರ ಕಿಟ್ ಹಂಚಿದ್ದಾರೆ. ಸಾರಾ ಗೋವಿಂದ್ ನಮ್ಮ ನಾಡಿನವರು, ಕೆ.ಆರ್.‌ನಗರದವರು. ನಮ್ಮವರು ಇಂತ ಕಾರ್ಯಕ್ರಮ‌ ಮಾಡಬೇಕಾದರೆ ತಪ್ಪಿಸಿಕೊಳ್ಳೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಸಾರಾ ಗೋವಿಂದ್ ಈ ಹಿಂದೆನೇ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರೆ ಶಾಸಕರು ಅಥವಾ ಎಂಎಲ್ ಸಿ ಹಾಗೂ ಮಿನಿಸ್ಟರ್ ಆಗ್ತಾ ಇದ್ದರು. ತಡವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಆದರೂ ಅವರಿಗೆ ಒಳ್ಳೆಯದಾಗಲಿ ಎಂದು ಅವರು ಹಾರೈಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ