ಶಿವಮೊಗ್ಗದ ರೀತಿ ಕಲ್ಪತರು ನಾಡಿನಲ್ಲಿ ಸಾವರ್ಕರ್ ಪ್ಲೆಕ್ಸ್..!

ಬುಧವಾರ, 17 ಆಗಸ್ಟ್ 2022 (20:53 IST)
ಇಡೀ ದೇಶವೇ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯ ಮುಳುಗಿದ್ದರೆ. ಇತ್ತ ಕಿಡಿಗೇಡಿಗಳು ಸಾವರ್ಕರ್ ಭಾವಚಿತ್ರ ಇರೋ ಪ್ಲೆಕ್ಸ್ ನಲ್ಲಿ ಸಾವರ್ಕರ್ ಚಿತ್ರ ಕತ್ತರಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಅಭಿನಂದನೆ ಸಲ್ಲಿಸಲು ನಗರದ ಪ್ರಮುಖ ಸ್ಥಳಗಳಲ್ಲಿ ಹಾಕಿದ್ದ ಪ್ಲೆಕ್ಸ್ ನಲ್ಲಿದ್ದ  ಸಾವರ್ಕರ್ ಭಾವಚಿತ್ರಕ್ಕೆ ಕತ್ತರಿ ಹಾಕಿದ್ದಾರೆ. ಈ ಘಟನೆಯನ್ನು ನಗರ ಶಾಸಕ ಜ್ಯೋತಿಗಣೇಶ್ ಖಂಡಿಸಿದ್ದಾರೆ.  ಅಲ್ಲದೇ ಜನತೆ ಯಾವುದೇ ಪ್ರಚೋದನೆಗೆ ಒಳಗಾಗದಂತೆ ಮನವಿ ಮಾಡಿದ್ದಾರೆ. ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ತೆರಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ರಾಹುಲ್ ಕುಮಾರ್ ಶಹಪುರ್ ವಾಡ್ ಅವರಿಗೆ ದೂರು ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ