ಯುವ ಪ್ರೇಮಿಗಳನ್ನು ಬೇರ್ಪಡಿಸಿ ಹೀಗಾ ದ್ವೇಷ ಸಾಧಿಸೋದು

ಮಂಗಳವಾರ, 24 ಡಿಸೆಂಬರ್ 2019 (18:23 IST)

ಯುವ ಜೋಡಿಗಳು ಪರಸ್ಪರ ಪ್ರೀತಿ ಮಾಡ್ತಿದ್ದರು. ಮದುವೆಯಾಗೋಕೆ ಅಂತ ನಿಶ್ಚಿತಾರ್ಥನಾ ಮಾಡಿಕೊಂಡಿದ್ರು. ಆದರೆ ಇವರ ಪ್ರೀತಿಗೆ ಮೇಲೆ ಬೇರೆಯವರ ಕಣ್ಣು ಬಿದ್ದಾಗ ನಡೆಯಬಾರದ್ದು ನಡೆದು ಹೋಗಿದೆ.
 

ರಾಜೇಶ್ ಹಾಗೂ ಯುವತಿಯೊಬ್ಬಳು ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರ ಮನೆಯಲ್ಲಿ ವಿಷಯ ತಿಳಿಸಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ರು. ಇನ್ನೇನು ಮದುವೆಗೆ ಸಿದ್ಧತೆ ನಡೆದಿರಬೇಕಾದರೆ ಹೀಗೆಲ್ಲಾ ಆಗಿ ಹೋಗಿದೆ.

ಆರೋಗ್ಯ ಸ್ವಾಮಿ, ಆರೋಗ್ಯ ಸ್ವಾಮಿ ಸೋಸು, ಪೀಟರ್, ಸಗಯರಾಜ್ ಎಂಬುವರು ಎನೇನೋ ಸುಳ್ಳು ಹೇಳಿ ಪ್ರೇಮಿಗಳ ವಿವಾಹವನ್ನು ಮುರಿದಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದೇ ದ್ವೇಷ ಸಾಧಿಸಿ ರಾಜೇಶ್ (25) ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು, ರಾಯಚೂರು ಸಿಂಧನೂರಿನಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ