ಬಿಜೆಪಿಯಿಂದ ಕಾಂಗ್ರೆಸ್ ಮೇಲೆ ಗಂಭೀರ ಆರೋಪ- ಠಾಣೆ ಮುಂದು ದೊಡ್ಡ ಹೈಡ್ರಾಮಾ

ಶನಿವಾರ, 3 ಡಿಸೆಂಬರ್ 2022 (20:52 IST)
ಮತದಾರರ ಲಿಸ್ಟ್ ಹಿಡಿದು ಮನೆ ಮನೆ ಸರ್ವೆ ಮಾಡ್ತಿದ್ದವರನ್ನ ಬಂಧಿಸಿದ್ದಾರೆ.ಇನ್ನೂ ಯಶವಂತಪುರ ಪೊಲೀಸರು ಇಬ್ಬರು ಯುವಕರನ್ನ ಠಾಣೆಗೆ ಕರೆಸಿ ವಿಚಾರಣೆ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನ ಕೂಗಿದರು. ವಿಷಯ ತಿಳಿಯುತ್ತಂದೆ ಸ್ಟೇಷನ್ ಬಳಿ‌ ಬಂದ ಕುಸುಮಾ ಹಾಗೂ ಹನುಮಂತರಾಯಪ್ಪ ಮಾಹಿತಿಯನ್ನು ಪಡೆದುಕೊಂಡರು.ಸ್ಟೇಷನ್ ಹೊರಗಡೆ ಕೈ.ಕಮಲ‌ ಕಾರ್ಯಕರ್ತರು ಘೋಚಣೆಗಳನ್ನ ಕೂಗಿ ಕೆಲಕಾಲ ಹೈ ಡ್ರಾಮವೇ ನಡೆದು ಹೋಯ್ತು
 
ಇನ್ನೂ ಚಿಲುಮೆ ಸಂಸ್ಥೆ ಮಾಡಿದ ಅಕ್ರಮದ ಹಿನ್ನೆಲೆ ಇಲ್ಲಿಯವರೆಗೂ‌15 ಜನರ‌ ಬಂಧನ ವಾಗಿದೆ.ಇಬ್ಬರು ಐಎಎಸ್ ಅಧಿಕಾಗಳ ಸಸ್ಪೆಂಡ್ ಆಗಿದ್ದಾರೆ. ಒಂದಷ್ಟು ಜನ ಬಂಧನದ ಭೀತಿಯಿಂದ ‌ನೀರಿಕ್ಷಣ ಜಾಮೀನಿಗೆ  ಟವಲ್‌ ಹಾಕಿದ್ದಾರೆ..ಈಗ ಕೈ ಕಡೆ ತಿರುಗಿರುವ ಈ ಬಾಣ ಯಾರಿಗೆ ನಾಟುತ್ತೋ ಕಾದು ನೋಡಬೇಕು.‌ಒಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನಾ ಹರಾಜ್ ಆಗಿರೋದಂತು‌ ಸುಳ್ಳಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ