ಸಿದ್ದರಾಮಯ್ಯ – ಖರ್ಗೆ ಭೇಟಿ : ಡಿಕೆಶಿಗೆ ಭರ್ಜರಿ ಟಾಂಗ್

ಭಾನುವಾರ, 26 ಜನವರಿ 2020 (18:45 IST)
ಕಾಂಗ್ರೆಸ್ ನಲ್ಲಿ ಕೆಪಿಸಿಸಿ, ಕಾರ್ಯಾಧ್ಯಕ್ಷರ ಗದ್ದುಗೆ ಗುದ್ದಾಟ ಆಂತರಿಕವಾಗಿ ಮುಂದುವರಿದಿರುವಂತೆ ಇದೀಗ ಪ್ರಮುಖ ನಾಯಕರು ಭೇಟಿ ಮಾಡಿರೋದು ಚರ್ಚೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಲ್ಲಿ ಮಹತ್ವದ ವಿಷಯಗಳು ಚರ್ಚೆಯಾಗಿವೆ.

ಮೂಲ ಕಾಂಗ್ರೆಸ್ಸಿಗರಾದ ಖರ್ಗೆಯವರನ್ನು ಸಿದ್ದರಾಮಯ್ಯ ಭೇಟಿ ಮಾಡಿ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿರೋದು ಕುತೂಹಲ ಹೆಚ್ಚುವಂತೆ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಕೇಳಿಬರುತ್ತಿರುವ ನಡುವೆಯೇ ಉಭಯ ನಾಯಕರ ಭೇಟಿ ಕೈ ಪಾಳೆಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ