ಸಿದ್ದರಾಮಯ್ಯ ಈ ಕಾರಣಕ್ಕೆ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿಲ್ಲ

ಶುಕ್ರವಾರ, 9 ಆಗಸ್ಟ್ 2019 (18:29 IST)
ರಾಜ್ಯದ ಉತ್ತರ ಕರ್ನಾಟಕ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಇದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಈ ಕಾರಣಕ್ಕೆ ಸಂತ್ರಸ್ಥರನ್ನ ಭೇಟಿ ಆಗಿಲ್ವಂತೆ.

ಟ್ವೀಟ್ ಮಾಡೋ ಮೂಲಕ ಈ ವಿಷಯ ತಿಳಿಸಿರುವ ಸಿದ್ದರಾಮಯ್ಯನವರು, ನೆರೆ ಪೀಡಿತ ಪ್ರದೇಶಗಳನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದಿದ್ದಾರೆ.

ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆದಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿರುವೆ. ಮನಸ್ಸು ಹಾತೊರೆಯುತ್ತಿದ್ದರೂ ದುರಾದೃಷ್ಟಕ್ಕೆ ಕಣ್ಣಿನ ಚಿಕಿತ್ಸೆಯಿಂದಾಗಿ ಸಾಧ್ಯವಾಗುತ್ತಿಲ್ಲ ಅಂತ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ