ಎಸ್ ಐಟಿ ಯಿಂದ ಸತ್ಯ ಹೊರ ಬರಲು ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ

ಮಂಗಳವಾರ, 30 ಮಾರ್ಚ್ 2021 (14:09 IST)
ಬೆಂಗಳೂರು : ಸಿಡಿ ಕೇಸ್ ಬಗ್ಗೆ ಸಿಜೆ ತನಿಖೆಯಾಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಎಸ್ ಐಟಿ ಯಿಂದ ಸತ್ಯ ಹೊರ ಬರಲು ಸಾಧ್ಯವಿಲ್ಲ. ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆ ಆಗಲಿ. ಯುವತಿಯೇ ಸಿಜೆಗೆ ಪತ್ರ ಬರೆದಿದ್ದಾಳೆ. ಸಿಜೆ ಏನು ಮಾಡ್ತಾರೋ ನೋಡೋಣ. ಈ ಬಗ್ಗೆ ಕಾನೂನು ಹೋರಾಟಗಳು ನಡೆಯಲಿ. ಆದ್ರೆ ಕಲ್ಲು ಹೊಡೆಯೋದನ್ನು ಗೂಂಡಾಗಿರಿ ಅಂತಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಿ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಾವು ಸಭೆ, ಸಮಾರಂಭ ಮಾಡು ವಾಗ ನಿಯಮ ಪಾಲಿಸ್ತೇವೆ. ಸರ್ಕಾರ ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ