ನೀನೂ ಒಬ್ಬ ಲೀಡರಾ? ಸಚಿವ ಪುಟ್ಟರಂಗಶೆಟ್ಟಿಗೆ ಸಿದ್ಧರಾಮಯ್ಯ ಫುಲ್ ಕ್ಲಾಸ್

ಮಂಗಳವಾರ, 28 ಮೇ 2019 (11:25 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರದಲ್ಲಿ ಮತ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಪುಟ್ಟರಂಗಶೆಟ್ಟಿ ವಿರುದ್ದ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ.


ತಮ್ಮನ್ನು ಭೇಟಿ ಮಾಡಲು ಬಂದ ಪುಟ್ಟರಂಗಶೆಟ್ಟಿಗೆ ಫುಲ್ ಕ್ಲಾಸ್ ತೆಗೆದುಕೊಂಡಿರುವ ಸಿದ್ದರಾಮಯ್ಯ ನೀನೂ ಒಬ್ಬ ಲೀಡರಾ? ಪಾರ್ಟಿಗೆ ಲೀಡ್ ತಂದುಕೊಡದೇ ಇದ್ದ ಮೇಲೆ ಏನು ಮಾಡ್ತಾ ಇದ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.

ಚಾಮರಾಜನಗರದಲ್ಲಿ ಧ್ರುವನಾರಾಯಣ್ ಸೋಲಿಗೆ ಸಿದ್ದರಾಮಯ್ಯ ಪುಟ್ಟರಂಗಶೆಟ್ಟಿ ಮೇಲೆ ಗರಂ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ