ಸಿದ್ದು ಬಿಜೆಪಿಗೆ ಗುದ್ದು

ಗುರುವಾರ, 3 ಮಾರ್ಚ್ 2022 (16:44 IST)
ಕಾಂಗ್ರೆಸ್​ನ ಐತಿಹಾಸಿಕ ಪಾದಯಾತ್ರೆ ಇಂದು ಅಂತ್ಯವಾಗುತ್ತಿದೆ ಎಂದು ಬೆಂಗಳೂರಿನಲ್ಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬೆಂಗಳೂರು ಜನರಿಗೆ ಕುಡಿವ ನೀರಿಗಾಗಿ ಹೋರಾಟ ಮಾಡ್ತಿದ್ದೇವೆ. ಮುಂದಿನ 50 ವರ್ಷಗಳಿಗಾಗಿ ಈ ಯೋಜನೆ ಜಾರಿಯಾಗಬೇಕು.
ನಮ್ಮ ಸರ್ಕಾರ ಇದ್ದಾಗಲೇ ಯೋಜನೆಗೆ ಡಿಪಿಆರ್​ ಮಾಡಿದ್ದೆವು. ಸಚಿವ ಗೋವಿಂದ ಕಾರಜೋಳ ಸುಳ್ಳು ಹೇಳಿ ದಿಕ್ಕು ತಪ್ಪಿಸ್ತಿದ್ದಾರೆ. ಮೇಕೆದಾಟು ಹೋರಾಟವನ್ನು ನಾವು ಇಲ್ಲಿಗೆ ಅಂತ್ಯಮಾಡುವುದಿಲ್ಲ. ಜನರ ಬಳಿಗೆ ಹೋಗುತ್ತೇವೆ, ಜನರ ಮಧ್ಯೆ ಹೋರಾಟ ಮಾಡುತ್ತೇವೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ