ಬಿಂಗಿ ಹಬ್ಬ ಮುಗಿಸಿ ಸಾವನ್ನಪ್ಪಿದ್ದು ಹೇಗೆ?

ಸೋಮವಾರ, 2 ಜುಲೈ 2018 (20:43 IST)
ಅಲ್ಲಿ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ ಹಬ್ಬದ ಆಚರಣೆ ಬಳಿಕ ಸ್ನಾನಕ್ಕೆಂದು ಆರು ಜನರು ಕೆರೆಗೆ ಧುಮುಕಿದ್ದರು. ಆದರೆ ವಿಧಿ ಆಟ ಬೇರೆಯೇ ಆಗಿತ್ತು. ಸ್ನಾನ ಮಾಡುವುದಕ್ಕೆ ಅಂತ ಧುಮುಕಿದವರಲ್ಲೊಬ್ಬ ಸಾವನ್ನಪ್ಪಿದ್ದಾನೆ. 
 
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಎಂಬಲ್ಲಿ ಈ ಘಟನೆ ನಡೆದಿದೆ. ಅರಿಶಿನಗೋಡ ಮೂಲದ ಬೇಡ್ಕಣಿಯಲ್ಲಿ ವಾಸವಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತನ ಹೆಸರು ದಾಸ (30) ಎಂದು ಗುರುತಿಸಲಾಗಿದೆ. ಆದರೆ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಬೇಡ್ಕಣಿಯ ಶನೇಶ್ವರ ದೇವಾಲಯದಲ್ಲಿ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಿಂಗಿ ಹಬ್ಬ ಮುಗಿಸಿ ಸ್ನಾನಕ್ಕೆಂದು ಆರೆಂಟು ಜನರು ಕೆರೆಗೆ ಧುಮುಕಿದ್ದರು. ಆದರೆ ಅವರಲ್ಲಿ ದಾಸ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಶವ ಹುಡುಕಾಟದಲ್ಲಿ ತೊಡಗಿದ್ದಾರೆ.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ