ಗೌರಿ ಲಂಕೇಶ್ ನಿವಾಸದಲ್ಲಿ ಎಸ್ಐಟಿ ತಂಡ

ಗುರುವಾರ, 7 ಸೆಪ್ಟಂಬರ್ 2017 (10:28 IST)
ಬೆಂಗಳೂರು: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಬೇಧಿಸಲು ನೇಮಕಗೊಂಡಿರುವ ಬಿಕೆ ಸಿಂಗ್ ನೇತೃತ್ವದ ಎಸ್ಐಟಿ ತಂಡ ಗೌರಿ ನಿವಾಸಕ್ಕೆ ಆಗಮಿಸಿದೆ.

 
ಮನೆಯ ಮುಂದೆ ಹೆಲ್ಮೆಟ್ ಧರಿಸಿದ್ದ ಹಂತಕನ ಗುಂಡೇಟಿಗೆ ಗೌರಿ ಬಲಿಯಾಗಿದ್ದರು. ಇದೀಗ ಮನೆಯ ಮುಂದೆ ಪೊಲೀಸ್ ಸರ್ಪಗಾವಲು ಇದೆ.

ಗೌರಿ ನಿವಾಸ ಸುತ್ತಮುತ್ತ ತನಿಖೆ ನಡೆಸಲು ಎಸ್ಐಟಿ  ತಂಡ ಆಗಮಿಸಿದ್ದು, ತೀವ್ರ ತಪಾಸಣೆ ನಡೆಸುತ್ತಿದೆ. ಇನ್ನೊಂದೆಡೆ ಹತ್ಯೆ ಪ್ರಕರಣ ಬೇಧಿಸಲು ನೇಮಕವಾದ ಎಸ್ಐಟಿ ತಂಡದ ವಿರುದ್ಧ ಅಸಮಾಧಾನವೂ ಕೇಳಿಬಂದಿದೆ. ಬಿಕೆ ಸಿಂಗ್ ನೇತೃತ್ವದ ಎಸ್ಐಟಿ ತಂಡದ ಬದಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.

ಇದನ್ನೂ ಓದಿ.. ನಕ್ಸಲರಿಂದ ಗೌರಿ ಲಂಕೇಶ್ ಗೆ ಬೆದರಿಕೆ ಈಮೇಲ್ ಬಂದಿತ್ತು: ಇಂದ್ರಜಿತ್ ಲಂಕೇಶ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ