ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎನ್ನುತ್ತಾರೆ. ಹೆತ್ತು, ಹೊತ್ತು ಜೀವನ ರೂಪಿಸಿದ ಅಮ್ಮ ದೇವರಿಗಿಂತಲೂ ಮಿಗಿಲೆನಿಸುತ್ತಾಳೆ. ತಾಯಿಯನ್ನು ಪ್ರೀತಿಸುವುದು, ಆರಾಧಿಸುವುದು ಸಾಮಾನ್ಯ. ಆದರೆ ಹಾವೇರಿಯ ಈ ಪುತ್ರರು ತಮ್ಮ ಹೆತ್ತವ್ವನಿಗಾಗಿ ದೇವಸ್ಥಾನವನ್ನೇ ಕಟ್ಟಿದ್ದಾರೆ.
ನವರಾತ್ರಿ ಸಮಯದಲ್ಲಿ ತಾಯಿಗೆ ವಿಶೇಷ ಪೂಜೆಯನ್ನು ಆಯೋಜಿಸಲಾಗುತ್ತದೆ.
ಹೆತ್ತವರನ್ನು ಕಸದಂತೆ ಬೀದಗೆಸೆಯುವ ಹೊಣೆಗೇಡಿ ಮಕ್ಕಳ ನಡುವೆ ಅಣ್ಣಪ್ಪ ಮತ್ತು ಅವರ ಸಹೋದರರು ವಿಭಿನ್ನವಾಗಿ ನಿಲ್ಲುತ್ತಾರೆ.