ಈ ಕಾರಣಕ್ಕೆ ತಂದೆಯನ್ನೇ ಕೊಂದ ಮಗ!

ಭಾನುವಾರ, 30 ಮೇ 2021 (09:15 IST)
ಚಿಕ್ಕಮಗಳೂರು: ಹಣ ಕೇಳಿದಾಗ ತಂದೆ ನೀಡಿಲ್ಲವೆಂದು ಮಗನೇ ತಂದೆಯನ್ನು ಬರ್ಬರವಾಗಿ ಕೊಂದ ಘಟನೆ ಚಿಕ್ಕಮಗಳೂರಿನ ಚನ್ನಡ್ಲುವಿನಲ್ಲಿ ನಡೆದಿದೆ.

ಸುಂದರ ಪೂಜಾರಿ ಮೃತಪಟ್ಟ ವ್ಯಕ್ತಿ. ಇವರು ಪಾರ್ಶಾವಾಯುವಿನಿದ್ದ ಪೀಡಿತರಾಗಿದ್ದರು. ಹಿರಿಯ ಮಗ ನಿಕೇಶ್ ಬೆಂಗಳೂರಿನಲ್ಲಿ ವಾಸವಿದ್ದ. ಕೊರೊನಾ ಕಾರಣದಿಂದ ಊರಿಗೆ ಬಂದವನು ಆಗಾಗ ತಂದೆ-ತಾಯಿಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ.ಸುಂದರ ಪೂಜಾರಿಯವರು ಹಣ ಕೊಡಲು ನಿರಾಕರಿಸಿದ್ದಕ್ಕೆ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಸುಂದರ ಪೂಜಾರಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಘಟನೆಯ ಕುರಿತಂತೆ ಪೊಲೀಸರು ಆರೋಪಿ ನಿಕೇಶ್ ನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ