ಕುಮಾರಸ್ವಾಮಿ ಹಾಗೂ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ

ಬುಧವಾರ, 13 ಫೆಬ್ರವರಿ 2019 (11:25 IST)
ಬೆಂಗಳೂರು : ಅಪರೇಷನ್ ಕಮಲದ  ಆಡಿಯೋದ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ಹಾಸನದ ಬಿಜೆಪಿ  ಶಾಸಕ ಪ್ರೀತಂಗೌಡ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.


ಅಪರೇಷನ್ ಕಮಲದ ಆಡಿಯೋದಲ್ಲಿ ಎಂಟ್ರಿ ಕೊಟ್ಟ  ಹಾಸನದ ಬಿಜೆಪಿ  ಶಾಸಕ ಪ್ರೀತಂಗೌಡ, ಶರಣಗೌಡರ ಜೊತೆ ಮಾತನಾಡುವಾಗ ಅಪ್ಪ-ಮಕ್ಕಳು ಹೋದ ನಂತ್ರ ಜೆಡಿಎಸ್ ಗೆ ಉಳಿಗಾಲವಿಲ್ಲ. ಹೆಚ್.ಡಿ.ಡಿ ವಿಕೆಟ್ ಹೋಗಿ, ಕುಮಾರಣ್ಣ ಆರೋಗ್ಯ ಸರಿಯಿಲ್ಲ. ಇಬ್ಬರು ಹೋದ್ಮೇಲೆ ಜೆಡಿಎಸ್ ಗೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ.


ಅಲ್ಲದೇ ಆದರೆ ಸೂರ್ಯ ಚಂದ್ರ ಇರೋವರೆಗೂ ಉಳಿಯೋ ಪಕ್ಷವೆಂದರೆ ಅದು ಬಿಜೆಪಿ ಎಂದು ಹೇಳುವುದರ ಮೂಲಕ ಶಾಸಕ ಪ್ರೀತಂಗೌಡ ಶರಣಗೌಡರ ಮನವೊಲಿಸಲು ಪ್ರಯತ್ನಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ