ನಡೆದಾಡುವ ದೇವರ ಆರೋಗ್ಯ ಸುಧಾರಿಸಲು ವಿಶೇಷ ಪೂಜೆ

ಶುಕ್ರವಾರ, 18 ಜನವರಿ 2019 (15:17 IST)
ನಡೆದಾಡುವ ದೇವರ ಆರೋಗ್ಯ ಸುಧಾರಿಸಲು ವಿಶೇಷ ಪೂಜೆ ನಡೆಸಲಾಗಿದೆ.

ಚಾಮರಾಜನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ  ಶ್ರೀಗಳ ಪಾದುಕೆ ಇಟ್ಟು ಪೂಜೆ ನೆರವೇರಿಸಲಾಯಿತು. ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ತುಮಕೂರು ಸಿದ್ದಗಂಗಾ ಮಠದ ಸ್ವಾಮೀಜಿಗಳು ಇನ್ನೂ ನೂರುಕಾಲ ಬಾಳಿ ಬದುಕಲಿ ಎಂದು  ದೇವರಲ್ಲಿ ಭಕ್ತರು ಬೇಡಿಕೊಂಡರು.

ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡಬೇಕೆಂದು ಆಗ್ರಹ ಮಾಡಲಾಯಿತು. ಜಿಲ್ಲಾ ವೀರಶೈವ ಮಹಾಸಭಾ ವತಿಯಿಂದ ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಲಾಯಿತು. ಚಾಮರಾಜನಗರದ ವಿರಕ್ತ ಮಠದ ಮುಂಭಾಗದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ ಭಕ್ತರಿಗೆ ಜನರ ಸ್ಪಂದನೆ ವ್ಯಾಪಕವಾಗಿ ದೊರೆಯುತ್ತಿದೆ.

ರಾಜ್ಯದ ಎಲ್ಲಾ ಮಠಾಧೀಶರಿಗೆ ಮಾದರಿ ಪುರುಷರಾಗಿರುವ ಶ್ರೀಗಳು ಗುಣಮುಖರಾಗಲೆಂದು ಭಕ್ತರು ಪ್ರಾರ್ಥಿಸಿದರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ