ಯಡಿಯೂರಪ್ಪ ಗೆ ಪ್ರತ್ಯೇಕ ಪ್ರವಾಸಕ್ಕೆ ವೇಧಿಕೆ ಸಜ್ಜು

ಭಾನುವಾರ, 26 ಫೆಬ್ರವರಿ 2023 (18:41 IST)
ಇನ್ನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಸದನದಲ್ಲಿ ಹೇಳುತ್ತಿದಂತೆ ಕೆಲವು ಲಿಂಗಾಯತ  ಶಾಸಕರಿಗೆ ಆತಂಕ ಶುರುವಾಗಿದೆ.ಚುನಾವಣಾ ಸಮೀಪದಲ್ಲಿ ಯಡಿಯೂರಪ್ಪ ಅವರನ್ನ ಕ್ಷೇತ್ರಕ್ಕೆ ಕರೆಸಿ ಲಿಂಗಾಯತ ಸಮಾಜವನ್ನು ಸೆಳೆಯಬೇಕು ಎಂದು ಪ್ಲ್ಯಾನ್ ಹಾಕಿದ್ದ ಶಾಸಕರಿಗೆ ಬಿ ಎಸ್ ವೈ ಶಾಕ್ ನೀಡಿದ್ದಾರೆ.ಪಕ್ಷದ ಚಟುವಟಿಗೆಯಲ್ಲಿ ಭಾಗಿ ಆಗ್ತಿನಿ ಎಂದು ಹೇಳಿದರು. ಶಾಸಕರಿಗೆ ಮಾತ್ರ ಆತಂಕ ಮನೆ ಮಾಡಿದೆ ಈ ಬಗ್ಗೆ ಶಾಸಕರು ಹೈ ಕಮಾಂಡ್ ನಾಯಕರ ಬಳಿ ಅಳಲನ್ನ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇನ್ನೂ ಶಾಸಕರ ಆತಂಕ ಒಂದು ಕಡೆ ಆದ್ರೆ ಹೈ ಕಮಾಂಡ್ ಹೊಸ ಪ್ಲ್ಯಾನ್ ರೆಡಿ ಮಾಡಿದೆ ಯಡಿಯೂರಪ್ಪ ಅವರಿಗೆ ಅಂತಾನೆ ಪ್ರತ್ಯೇಕ ವೇಧಿಕೆ ಸಿದ್ದಪಡಿಸಲು ರಣತಂತ್ರ ರೂಪಿಸುತ್ತಿದೆ. ಪ್ರಧಾನಿ ಮೋದಿ,ಜೆಪಿ ನಡ್ಡಾ,ಅಮಿತ್ ಶಾ ಅವರಿಗೆ ಏರ್ಪಡಿಸಿದಂತೆ  ಮಾರ್ಚ್ ತಿಂಗಳನಲ್ಲಿ  ಬಿ ಎಸ್ ವೈ ಗೂ ಕಾರ್ಯಕ್ರಮವನ್ನು ಏರ್ಪಡಿಸಲು ತಯಾರಿ ನಡೆಸಿದೆ. ಈ ಬಗ್ಗೆ ಈಗಾಗಲೇ ಯಡಿಯೂರಪ್ಪ ಅವರ ಗಮನಕ್ಕೂ ತಂದಿದ್ದಾರೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ