ತಾರಕಕ್ಕೇರುತ್ತಾ 3 ಡಿಸಿಎಂ ಕೋಲ್ಡ್​ ವಾರ್​?

ಬುಧವಾರ, 20 ಸೆಪ್ಟಂಬರ್ 2023 (19:05 IST)
ರಾಜ್ಯದಲ್ಲಿ ಮೂರು ಡಿಸಿಎಂ ಕೋಲ್ಡ್ ವಾರ್ ಶುರುವಾಗಿದೆ.. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​​​ ನಡುವೆ ಶೀತಲ ಸಮರ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಸಿಎಂ ಸಿದ್ದರಾಮಯ್ಯರ ಆಪ್ತ K.N.ರಾಜಣ್ಣ ಮೂವರು ಡಿಸಿಎಂ ಇರಬೇಕೆಂದು ಒತ್ತಾಯಿಸಿದ್ರು. ಸಿಎಂ ಸಿದ್ದರಾಮಯ್ಯ ತನ್ನ ಆಪ್ತನ ಮೂಲಕ ಈ ಮಾತನ್ನು ಹೇಳಿಸಿದ್ರು ಎಂಬ ಆರೋಪ ಸಹ ಕೇಳಿ ಬಂದಿತ್ತು.. ಸಿದ್ದು ವಿರುದ್ಧ ಡಿಕೆಶಿ ಬಣ ದಲಿತ ಸಿಎಂ ಬಾಣ ಬಿಟ್ಟಿತ್ತು. ಈ ಹಿನ್ನೆಲೆ ಡಿಸಿಎಂಗೆ ತಿರುಗೇಟು ನೀಡಲು ಸಿಎಂ ಬಣ ಮೂರು ಡಿಸಿಎಂ ಅಸ್ತ್ರ ಬಿಟ್ಟಿದೆ ಎನ್ನಲಾಗಿದೆ.. ಈ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ಸಿಎಂ ಸಿದ್ದರಾಮಯ್ಯರ ನಡುವೆ ಕೋಲ್ಡ್​ವಾರ್​​ ಶುರುವಾಗಿದ್ಯಾ ಎಂಬ ಅನುಮಾನ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ