ಸಿದ್ದಾರ್ಥ್ ಪತ್ತೆಗೆ ಕೇಂದ್ರದ ನೆರವು ಕೋರಿದ ರಾಜ್ಯ ಸಂಸದರು

ಮಂಗಳವಾರ, 30 ಜುಲೈ 2019 (10:53 IST)
ಮಂಗಳೂರು : ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾರ್ಥ್ ಪತ್ತೆಗಾಗಿ ರಾಜ್ಯ ಸಂಸದರು ಕೇಂದ್ರ ಸರ್ಕಾರದ  ನೆರವು ಕೋರಿದ್ದಾರೆ ಎಂಬುದಾಗಿ ತಿಳಿದುಬಂದಿದೆ.




ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಳಿನ್ ಕುಮಾರ್ ಕಟೀಲು ಭಗವಂತ ಖೂಬಾ, ಸಂಗಣ್ಣ ಕರಡಿ, ಗದ್ದಿಗೌಡರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ  ಸಿದ್ದಾರ್ಥ್ ಪತ್ತೆಗಾಗಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.


ಈಗಾಗಲೇ ಸಿದ್ದಾರ್ಥ್ ಶೋಧ ಕಾರ್ಯ ನಡೆಯುತ್ತಿದ್ದು, ಸಿಎಂ ಯಡಿಯೂರಪ್ಪ ಅವರು  ಹೆಲಿಕಾಪ್ಟರ್, ಕೋಸ್ಟಲ್ ಗಾರ್ಡ್ ಬಳಸಿ ಶೋಧ ನಡೆಸುವಂತೆ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ