ಹಂಪಿ ಪ್ರವಾಸಕ್ಕೆ ಬಂದ ವಿದ್ಯಾರ್ಥಿ ಸಾವನ್ನಪ್ಪಿದ್ಯಾಕೆ?

ಶನಿವಾರ, 15 ಡಿಸೆಂಬರ್ 2018 (16:54 IST)
ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ಶಾಲಾ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಾಲುವೆಯಲ್ಲಿ ಬಿದ್ದು ವಿದ್ಯಾರ್ಥಿಯೊಬ್ಬ ನೀರುಪಾಲಾಗಿದ್ದಾನೆ. ಹೊಸಪೇಟೆ ಬಳಿಯ ತುಂಗಭದ್ರ ಎಚ್ ಎಲ್ ಸಿ ಕಾಲುವೆಯಲ್ಲಿ ಜಾರಿಬಿದ್ದು ಮೃತನಾಗಿದ್ದಾನೆ.

ಮೃತ ವಿನೋದ್ ಅತ್ತಿಗೇರಿ, ಧಾರವಾಡ ಜಿಲ್ಲೆ ಕುಂದುಗೋಳ ತಾಲೂಕಿನ ಶಂಶಿ ಗ್ರಾಮದ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ‌. ಓದುತ್ತಿದ್ದನು. ಹಂಪಿ ಪ್ರವಾಸಕ್ಕೆ ಆಗಮಿಸಿದಾಗ ಕಾಲುವೆ ಬಳಿ ತೆರಳಿದಾಗ ಕಾಲು‌ ಜಾರಿ ಬಿದ್ದು ಅವಘಡ ಸಂಭವಿಸಿದೆ.

ನೀರಿನಲ್ಲಿ ಮುಳುಗಿರುವ ವಿದ್ಯಾರ್ಥಿಯ ಶವ ಹೊರತೆಗೆಯಲು ಪ್ರಯತ್ನ ಮಾಡುತ್ತಿದ್ದು, ಈಜುಗಾರರಿಂದ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಹಂಪಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ